Total Pageviews

Thursday 10 May 2012

ಆಶಯ

ಮನದಲ್ಲಿ ಗೊಂದಲವೇಕೆ?
ಬಯಕೆಗಳ ಬಾಂದಳವೇಕೆ?
ನಗನಾಣ್ಯದ ಹಂಬಲವೇಕೆ?
ಪ್ರಕ್ರತಿಯ ಸೊಭಗಿರಲು,
ಕಲ್ಪನೆಯ ಕಣ್ಣಿರಲು,
ಕನಸಿನ ಸಾಮ್ರಾಜ್ಯಕ್ಕೆ ಬೇರೆ
ಗೋಪುರ ಕಟ್ಟಬೇಕೆ?
ಸಣ್ಣ-ದೊಡ್ಡವ ಎಂಬ ಬೇಧವೇಕೆ?
ತುಚ್ಛ ಬೇಧದ ಭಾವವೇಕೆ??
ಕಟ್ಟಿದ ಕಾರ್ಮುಗಿಲು ದೂರಸರಿದಾಗ
ದುರಾಸೆಯ ಪಟ್ಟ ಕೊರಗೇಕೆ??
ಮನಪಕ್ಷಿಯ ಹಾರಿಬಿಡು;
ನೀಲಾಕಾಶದಲಿ ಕುಣಿಯುತಿರಲಿ.
ಕರುಣರಸ ಕಾರಂಜಿಯಂತೆ ಚಿಮ್ಮಿಬರಲಿ.
ಇದು ಹೊಸಬಾಳಿಗೆ,
ಹೊಸನಾಳೆಗೆ,
ಶುಭನಾಂಧಿಯ ಹಾಡುತಿರಲಿ...

2 comments:

  1. ಚಂದ ಬರದ್ಯೆ......

    ಎಲ್ಲವೂ ಕಾರಂಜಿಯಂತೆ ಚಿಮ್ಮೋ ಕುತೂಹಲಕ್ಕಾಗಿ.......

    ReplyDelete

Thanks