Total Pageviews

Thursday 23 May 2013

ಸಾರ್ಥಕ ಬದುಕು



ನೀರಲ್ಲಿ ಅರಳಿದ
ಬಿಳಿಕಮಲದ ಮೊಗ್ಗೊಂದು
ನೂರ್ಮಡಿಸುವ ಆಸೆಯ
ಹೊತ್ತು ಅರಳುತಿದೆ ಬಿರಿದು
ಪಕಳೆಯಲಿ ನಸುಗೆಂಪು
ತನ್ನೊಳಗೆ ಹೊಸಕಂಪು
ತಂಗಾಳಿಯ ಹಿತಸ್ಪರ್ಷಕೆ
ನಗುನಗುತ ತಲೆದೂಗಿ
ಹೇಳಿದೆ ಭಾಸ್ಕರಗೆ ಶುಭೋದಯ..

ಬುಡದಲ್ಲಿ ಕರಿಗೆಸರು
ಸುತ್ತೆಲ್ಲ ಬಳ್ಳಿಗಳ ಅಡರು
ನಡುವಲ್ಲಿ ಪುಟ್ಟ
ಜೀವಿಗಳ ಸಂತಾನ
ಪರೋಪಕಾರಿಯು ಅಹುದು
ಹೂಗಳ ಅರಸಿ.

ಅಲೆಗಳ ಕುಲುಕಾಟ
ದೋಣಿಗಳ ತಿರುಗಾಟ
ಕೀಟಗಳದ್ದಂತೂ ಎಲೆ ಹೂವ
ಕೊರೆಯುತ ಆಹಾರದ ಹುಡುಕಾಟ
ಕ್ಷಮೆಯಾ ಧರಿತ್ರಿಯ ಮಗಳೇ
ನೀ ಸೌಖ್ಯಕಾರಿಣಿ.!

ಸೌಂದರ್ಯದ ರಾಶಿ ನೀ;
ರೂಪದಲಿ ರಾಣಿ .
ಸುರ-ದೇವತೆಗಳ ಆಸನವು
ನೀ ಚಂದ್ರಮುಖಿ
ಕ್ಷಣಿಕ ಬದುಕಲೂ ಪಡೆವೆ
ಸಾರ್ಥಕ್ಯದ ಪರಿಪೂರ್ಣತೆಯ
ಓ ಕಮಲವೇ ನೀ ನಿಜಕ್ಕೂ ಸೌಭಾಗ್ಯವತಿ.


                                 --- ಮೌನ ವೀಣೆ
ಚಿತ್ರ ಕೃಪೆ - ಅಂತರ್ಜಾಲ

8 comments:

  1. Excellently Written... Keep Writing. All the best.

    ReplyDelete
  2. ಕೇಸರಿನ ಕಮಲ ಎನ್ನುವು ಬಲು ನಿಜ. ನೂರು ಹಿಂಸೆಗಳ ನಡುವೆ ಅರಳಿ ನಿಂತು ಸೊಬಗು ಸೂಸುವ ತಾವರೆಯು ನಮಗೆ ಎನಿತೋ ಆದರ್ಶಮಯೀ.

    http://badari-poems.blogspot.in

    ReplyDelete
    Replies
    1. ನಿಜ..

      ಕಮಲದ ಕ್ಷಣಿಕ ಸಾಥಕ ಬದುಕು ಆದರ್ಶಪ್ರಾಯವಾಗಿದೆ.
      ಧನ್ಯವಾದಗಳು ಸರ್

      Delete
  3. ತುಂಬಾ ಇಷ್ಟವಾಯ್ತು .ಸಾಲುಗಳೂ ,ಭಾವವೂ .
    ಬರೀತಾ ಇರಿ .

    ReplyDelete

Thanks