Total Pageviews

Wednesday, 20 February 2013

ಮತ್ತೆ ಮರುಗದಿರು..



ಚಿಂತೆ ಮಾಡುವುದೇಕೆ
ಇಲ್ಲದುದರ ಬಗ್ಗೆ
ಸಿಕ್ಕಿರುವುದರ ಬಗೆಗೆ
ಯೋಚಿಸಿಯೇ ಹೆಮ್ಮೆಪಡು
ಇದ್ದುದನು ಅನುಭವಿಸಿ
ಸುಖಿಯಗಿರು ಗೆಲುವಾಗಿರು..

ಬಯಸಿ ಮರುಗಿದರೆ
ಕೊರಗುವುದು ನಿನ್ನ ಜೀವ 

ನಿನಗಿರುವ ಸವಿಸಮಯ
ವ್ಯರ್ಥವಾಗುವುದು
ಹುಂಬ ಗೊಂದಲಗಳಲಿ.

ದಿನಗಳು ಉರುಳುವವು
ಸದ್ದಾಗದಂತೆ
ಸುಳಿವಿಲ್ಲದೆ ಸರಿದಿವೆ
ತಾ ಕಾರಣಗಳ ಮರೆತಂತೆ!!
ಇದ್ದು ಬಿಡು ಓ ಮನಸೇ..
ನಿನ್ನ ಪಾಡಿಗೆ ನೀನು
ನನ್ನ ಹೃದಯಕೆ ತಿಳಿಯದಂತೆ.
ಕಳಿಸದಿರು ಭಾವಗಳ
ಅದು ನೊಂದು ಅಳುವಂತೆ
.
              --ಮೌನ ವೀಣೆ

Monday, 21 January 2013

ಮತ್ತೆ ಬಾರದೇ ..ಕಳೆದುಹೋದ ಆ ಸುಂದರ ಸಂಜೆಗಳು..


ಇಂದೇಕೋ ಎಲ್ಲ ಕಳೆದುಕೊಂಡ ಭಾವ. ಪ್ರಪಂಚದ ಎಲ್ಲ ಜಡತ್ವದ ಅಂಶಗಳು ನನ್ನನ್ನೇ ಮುತ್ತಿಕೊಂಡಂತೆ. ಮಲಗಿದ್ದಲ್ಲೇ ಮಲಗಿ ಆರೋಗ್ಯವಾಗಿದ್ದರೂ ಆಲಸ್ಯತನವಂಟಿ ಏನೋ ಅನಾರೋಗ್ಯದ ಛಾಯೆ. ಅದೇ ಯಾಂತ್ರಿಕ ಬದುಕು, ಅದೇ office (ಅದೇ ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುವುದು) ಅದೇ ಕಂಪ್ಯೂಟರ್ ಪ್ರಪಂಚ. Google ಜೊತೆ ಒಂದಿಷ್ಟು ಹಗ್ಗಜಗ್ಗಾಟ, ಪ್ರತಿದಿನ ಬೆಳಗಾದರೆ ದಿನಚರಿ ಮುಗಿಸಿ ಆಫೀಸಿಗೆ ಓಡುವ ಧಾವಂತ. ಇನ್ನು ಸಂಜೆಯೋ ಅದೇ ಹಳೆ ವಿಷಯಗಳ ಚಿಂತನ-ಮಂಥನಗಳು ಆ client traffic drop ಆಯ್ತು  ಈ client rank ಇಲ್ಲ. ಮಾಡೋವಷ್ಟು work ಮಾಡಿದೀವಿ, actually we did good and more work for the traffic dropped why??? ಅದೇ ಒಂದಿಷ್ಟು ಚರ್ಚೆಗಳು, ಹಾಗೇ ನಾಲ್ಕಾರು colleague ಗೆಳತಿಯರಿಗೆ ಟಾಟಾ - bye ಹೇಳಿ ಇನ್ನಿಬ್ಬರು  ಗೆಳತಿಯರೊಂದಿಗೆ ಮನೆಯ ಕಡೆ ಪಯಣ. ಇರುವ ಮೂವರದ್ದೂ ಒಬ್ಬೊಬ್ಬರದ್ದು ಒಂದೊಂದು ಊರು. ಅದರಲ್ಲಿ ಅವರದೇ ಆದ ಒಂದಷ್ಟು ತಮ್ಮೂರ ಬಗೆಗಿನ ಒಣ  ಪ್ರತಿಷ್ಟೆಗಳು (ಇರಲೇ ಬೇಕು ಬಿಡಿ ಎಷ್ಟಂದ್ರೂ ಸ್ವರ್ಗಕ್ಕಿಂತಲೂ ಮಿಗಿಲಾದ ತಾಯ್ನೆಲ). ನನ್ನ ಮತ್ತು ಶೃಧ್ಹಾಳ ಸಣ್ಣ ಪುಟ್ಟ ವಾಗ್ವಾದಗಳು. ಆ ಮೊಂಡು ವಾದಗಳ ಇತ್ಯರ್ಥಕ್ಕೆ ಹಸೀನಾಳ ಮದ್ಯಸ್ಥಿಕೆಯ ಹಿತನುಡಿ. ಅವರಿಬ್ಬರ ವಾದಗಳಲ್ಲಿ ನನ್ನ ಅಂಬೋಣ(vote ups) . ಹೀಗೆ ಒಂದಷ್ಟು ಪ್ರೀತಿಯ ಜಗಳಗಳು, ಸಮಾಧಾನದ ನುಡಿಗಳು. conclusion ಏನು ಗೊತ್ತಾ?? ಯಾಕೋ lifu ಬೋರು. ಈ ದಿನಗಳೇ ಸರಿ ಇಲ್ಲ; ಹಾಗೆ ನಿರಾಶಾವಾದಿಗಳ ಹಾಗೆ ಜೀವನದ ಸುಖ-ದುಃಖಗಳ ಚಿಂತೆನೆಗಳು ಅದಕ್ಕೊಪ್ಪುವ ನಾಟಕೀಯ dialogueಗಳು. ಎಷ್ಟು ಚರ್ಚಿಸಿದರೂ ಅಷ್ಟೇ ಈ ಬದುಕಿನ ಗೋಳುಗಳು ಮುಗಿಯುವುದೇ ಇಲ್ಲವೆಂದು ಹೇಳಿ ಪಯಣ ಮರಳಿ ಗೂಡಿಗೆ. ದೇವರು ಈ ಜೀವಕ್ಕೆ ವರವಾಗಿಕೊಟ್ಟ ತುಂಬು ಪ್ರೀತಿ, ಕಾಳಜಿಯ ಮಹಾಪೂರ, ಹಾಲು ಜೇನಿನ ನನ್ನ family; ಅಪ್ಪ, ಅಮ್ಮ, ಒಬ್ಬಳೆ ತಂಗಿ, ಒಬ್ಬ ತಮ್ಮ ಅವುರುಗಳೊಂದಿಗೆ  ಒಂದೊಂದು ಮಾತು.

ತುಂಬಾ miss ಅನಿಸೋದು weekend ಇಳಿಸಂಜೆಗಳು. ಒಂದಷ್ಟು ಒಂಟಿತನ, ಕಟ್ಟಿದ ಕನಸುಗಳಿಗೆ ಬಣ್ಣ ತುಂಬುವುದು ಯಾವಾಗ ಎಂಬ ವಿಷಾದ, ದೇವರಿಗೆ ಕಿವಿಕೇಳುವುದೋ ಇಲ್ಲವೋ ಎಂಬ ಸಂಶಯ. ಇವುಗಳ ಮದ್ಯ ನೆನಪಾಗುವುದು ಬಾಲ್ಯದ ಸಂಜೆಗಳು. ಈ ಸಮಯ (ಡಿಸೆಂಬರ್ end ), ಶಾಲೆಯಲ್ಲಿ ಇರುವಾಗಲೇ ಚಿಂತೆ ಅಮ್ಮ ಗದ್ದೆಗೆ ಹುಲ್ಲು ಕೊಯ್ಯಲು ಹೋಗಿ ಬಿಟ್ಟಾಳೋ ಏನೋ ಎಂದು. ಏಕೆಂದರೆ ಅವಳೊಡನೆ ಹೋಗಿ ಗದ್ದೆಯಲ್ಲಿನ ಹಸಿಮಣ್ಣಿನಲ್ಲಿ  ಲಾಡು, ಚಕ್ಕಲಿ, ಕಡುಬು, ಕೊಡಬಳೆ ಮಾಡಿ ಒಣಹಾಕುವ  ಬಯಕೆ. ಗದ್ದೆಯ ಕೊನೆಯಲ್ಲಿ ಸಣ್ಣ ಹಳ್ಳ. ಏರಿಯ ಸುತ್ತ ದಟ್ಟವಾಗಿ ಬೆಳೆದ ಹೊಂಗೆಯ ಮರಗಳು. 4 - 5 ಓರಗೆಯ ಹುಡುಗ-ಹುಡುಗಿಯರ ಕೂಡಿ ಹೊಂಗೆ ಬಸ್ ಪ್ರಯಾಣದ ಆಟ. ಎಲೆಗಳೇ currency, ನೇರಳೆ ಎಲೆ 100 ರ ನೋಟು, ಹೊಂಗೆ ಎಲೆ 10 ರ  ನೋಟು, ನನ್ನ ತಮ್ಮನದು ಯಾವಾಗಲು ಕಂಡಕ್ಟರ ಕೆಲಸ, ದೊಡ್ಡಪ್ಪನ  ಮಗ ಯಾವಾಗಲು ಡ್ರೈವರ. ನಾನು,  ತಂಗಿ, ಪದ್ಮ ಎಲ್ಲ ಸಹ ಪ್ರಯಾಣಿಕರು. ಬಸ್ಸಿನಲ್ಲೊಂದಿಷ್ಟು ಆವಾಗಿನ ಹಿಟ್ ಸಿನಿಮಾದ ಹಾಡುಗಳು. ಸುಮ್ನೆ ರೇಡಿಯೋ ಆನ್ ಮಾಡುವುದು, ಹಾಡುವುದು ಮಾತ್ರ ನಾವೇ. ಹಿಂದಿ ಹಾಡುಗಳದ್ದಂತೂ ಸಾಹಿತ್ಯವೇ ತಿಳಿಯುತ್ತಿರಲಿಲ್ಲ. ಆದರೂ ಅದೇ tuneನಲ್ಲಿ ನಮ್ಮ lyrics ತುಂಬಾ ಮಜಾ ಕೊಡುತ್ತಿತ್ತು. ಡಿಮ್ ಧೀಂ ಟರರ್ರಾರರಾರ ಟರರಾರ. ಬುಲುಟರರಾರ..ಟೆವ್.ಟೆಟೆಟೆವ್...ಟೆಡೆಂವ್ ಟೆಡೆಡೆಡೆಂವ್ಡೆಂವ್, ಲಲಾಲಲಲ.. ಲಾಲಲಲ ......etc ಇವು ನಡುವಿನ ಮ್ಯೂಸಿಕ್ ಲೈನ್ ಗಳು. ಕತ್ತಲೆ ಆದದ್ದೇ ತಿಲಿಯುತ್ತಿರಲಿಲ್ಲ. ಕೆಲಸ ಮುಗಿಸಿ ಬಂದ ಅಪ್ಪ ಗದರಿದ ದ್ವನಿಯಲ್ಲಿ ಅಲುಗುತ್ತಿರುವ ನಮ್ಮ ಮರದ ಬಳಿ ಕೋಲುಹಿಡಿದು ಬಂದಾಗಲೇ ವಾಸ್ತವದ ನೆನಪು. ಆವಾಗ compulsory ಒಂದೆರಡು ಏಟುಗಳು. ಕೈಕಾಲು ತೊಳೆದು ಮನಸ್ಸಿಲ್ಲದೇ ಮುಖ ದುಮ್ಮಿಸಿಕೊಂಡು ಹೇಳುವ ಒಂದಷ್ಟು ಮಗ್ಗಿಗಳು ಶ್ಲೋಕಗಳು ಬಾಯಿಪಾಟಗಳು  etc.etc .. ಎಷ್ಟು ಚೆಂದಿತ್ತಪ್ಪಾ ಆ
ಸಂಜೆಗಳು, ಆ ಜೀವನ ..ಅನಿಸುವುದುಂಟು.

Wednesday, 2 January 2013

ದಯವಿಟ್ಟು ಸಹಾಯ ಮಾಡಿ - ಪುಟ್ಟ ಜೀವ ಬದುಕಲಿ

'ನಾನು ಮತ್ತು ನನ್ನ ಕನಸು' ಇವೇ  ನನ್ನಯ ಬದುಕು ಎಂಬಂತೆ ಛಲದಲ್ಲಿ ಬದುಕುತ್ತಿರುವ ಜನ ನಮ್ಮ ಶಂಕ್ರಣ್ಣ ( ಶಂಕರ ಭಟ್ ). ಸಾರ್ಥಕ್ಯದ ಜೀವನ. ಪ್ರತಿಯೊಬ್ಬರ ಕನಸು - ತಾನು ಮತ್ತು ತನ್ನದೊಂದು ಕುಟುಂಬ, ತನ್ನ ಮಕ್ಕಳು, ಒಂದು ಪುಟ್ಟ ಮನೆ, ಬದುಕಿಗೊಂದಿಷ್ಟು ಸಣ್ಣ ಆದಾಯ , ಆ ಆದಾಯಕ್ಕನುಸಾರ ಖರ್ಚುಗಳು , ಒಂದಿಷ್ಟು ಆಸೆಗಳು, ಕೈಗೂಡಿಸಲು ಪ್ರಯತ್ನ ಅವುಗಳ ಜೊತೆ ಒಂದಿಷ್ಟು ಸಮಾಧಾನ ತೃಪ್ತಿಗಳು . ಆದರೆ ತಾನೊಂದು ಬಗೆದರೆ ದೈವ ಬೇರೊಂದೇ ಬಗೆಯುವುದು ಎಂಬಂತೆ "ಥಲಸ್ಸೆಮಿಯ ಮೇಜರ್" ಅನಾರೋಗ್ಯದ ಭೂತ ಅವನ ಪುಟ್ಟ ಕಂದಮ್ಮನ ಬೆನ್ನತ್ತ ಬೇಕಾ ? ಲಕ್ಷಕ್ಕೊಬ್ಬರಿಗೆ ಬರುವುದಂತೆ ಆ ಕಾಯಿಲೆ; ಆ ಪುಟ್ಟಮ್ಮನಿಗೇ ಬರಬೇಕಾ ? ಪಾಪ ಕಳೆದ ೩ ವರ್ಷಗಳಿಂದ ಅವಳ ಕಾಯಿಲೆಯ ಹತೋಟಿಗೆ ಅವರು ಪಟ್ಟ ಪಾಡು ಅವರಿಗೆ ಗೊತ್ತು ಮತ್ತು ದೇವರಿಗೆ ಗೊತ್ತು. ಅವಳಿಗೆ ತನಗಾದ ಕಾಯಿಲೆಯ ಹೆಸರ ಹೇಳಲೂ ಬಾರದ 5th ಕ್ಲಾಸಿನ ಪುಟ್ಟ ಪೋರಿಗೆ ಬಂದಿದೆ ಎಂಬುದು ವಿಷಾದನೀಯ. ಖಾಯಂ ಆಗಿ ಆಕೆಯ ಜೀವದಲ್ಲಿ ರಕ್ತ ಉತ್ಪತ್ತಿಯಾಗಲು ಉತ್ತಮ ಚಿಕಿತ್ಸೆಯ ಅವಶ್ಯಕತೆಯಿದೆ ಮತ್ತೆ ಅದಕ್ಕೆ ತಗಲುವ ವೆಚ್ಚವೂ ಬಹಳ ದೊಡ್ಡದು(೨೦ ಲಕ್ಷ).ಸಣ್ಣ ಬಡ ರೈತ ಎಷ್ಟರ ಮಟ್ಟಿಗೆ ಹೊಂದಿಸಲು ಸಾದ್ಯ ನೀವೇ ಹೇಳಿ? ದಯವಿಟ್ಟು ನಿಮ್ಮಗಳ ಹಣದ ಋಣ ಆ ಪುಟಾಣಿ ಮೈತ್ರಿಗಿರಲಿ. ನಿಮ್ಮನೆಯ ಹುಡುಗಿಗೆ ನೀವು ಸಹಾಯ ಮಾಡಲಾರಿರಾ? ಹೇಳಿರುವುದು ಸುಳ್ಳು ಮೋಸ ಎಂದೆನಿಸಿದರೆ ವಿಚಾರಿಸಿಯೇ ಮುಂದುವರೆಯಿರಿ. ದೇವರು ಒಳ್ಳೆಯದು ಮಾಡಲಿ. 




ಬಾಲಕಿಯ ಚಕಿತ್ಸೆಗೆ ನೆರವಾಗುವವರು ಸಂಪರ್ಕಿಸಿ -

ಶಂಕರ ಭಟ್
Ph. 8762759505
ವಿಜಯಾ ಬ್ಯಾಂಕ್ ಯಲ್ಲಾಪುರ SB A/C - 1226010011000314
ಕರ್ನಾಟಕ ಬ್ಯಾಂಕ್ SB A/C - 352250010021501

https://www.facebook.com/shankar.bhat.940


ಹೊಸ ವರುಷ
ಹೊಸ ಆಸೆ
ಹೊಸತನದ ಸ್ಪುರಣೆಯಲಿ
ಹೊಸ ಮೈತ್ರಿಯ
ಹೊಂಗನಸ ಕೈಗೂಡಿಸುವ ತೃಷೆಯಲ್ಲಿ
ನಿಮ್ಮ ಪ್ರೀತಿ ಹಾರೈಕೆ
ನಿಮ್ಮ ಋಣಗಳು ಜೊತೆಯಿರಲಿ
ಈ ಮೈತ್ರಿಯ ಬಾಳಿನಲಿ
ಬೆಳಗಲಿ ಉತ್ಸಾಹದಿ 
ಅವಳೆಲ್ಲ ನಾಳೆಗಳು ಎಂದು ಹಾರೈಸೋಣ...

                      -- ಮೌನ ವೀಣೆ

Monday, 31 December 2012

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು







ಹೊಸ ವರ್ಷದ ಹೊಸದಿನ
ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ
ಈ ದಿನದಿಂದ ನಿಮ್ಮಾಸೆಗಳೆಲ್ಲ
ಹುಸಿಯಾಗದೆ ಹಸಿರಾಗಲಿ
ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ
ಬದುಕು ಬಂಗಾರವಾಗಲಿ. 

ಹೊಸ ವರ್ಷದ ಶುಭಾಶಯಗಳು..
                 -- ಮೌನ ವೀಣೆ


Wednesday, 26 December 2012

ಅನಿಸುತಿದೆ..

ಇಬ್ಬನಿಯಲಿ ನಾ ತೊಯ್ದು 
ನನ್ನ ಹೃದಯ ಮೃದುವಾಯ್ತು 
ನಿನ್ನ ನೆನಪಿನ ಗರಿಕೆ 
ಕ್ಷಣದಲ್ಲೇ ಹಸಿರಾಯ್ತು 
ನನ್ನೊಡಲಿನ  ಪ್ರೀತಿ 
ಮೊಗ್ಗರಳಿ ಹೂವಾಯ್ತು 
ಇಂತಿರಲು ನಾ ಕಂಡದ್ದು 
ಕನಸೆಂದು ನೋವಾಯ್ತು..

ಬೆಳದಿಂಗಳ ರಾತ್ರಿಯಲಿ 
ನಗುಮೊಗದ ಸರದಾರ 
ಬಾನ  ಚಂದ್ರನು ತಾನು 
ರೋಹಿಣಿ ಬಳಗವ ಕೂಡಿ 
ಮಧುಚಂದ್ರಕೆ ಹೊರಟಂತೆ 
ನೀ ಜೊತೆಗೆ ಇರದಿರಲು 
ನನ್ನ ನೋಡಿ ನಕ್ಕಂತೆ 
ಮೌನ ಗೌರಿಯ ಹಾಗೆ 
ನಾನೊಂಟಿ  ವನದಲ್ಲಿ.

ಅಲೆವ ಮನದೊಳಗಿಂದು 
ಜಿಗಿವ ಆಸೆಯ ಕಂತೆ 
ಸೋತ ಕಂಗಳವಳಗೆ
ನೂರು ಮಾತಿರುವಂತೆ 
ನೀನು ಎಲ್ಲಿಹೆಯೆಂದು 
ಮನವ ಕಾಡಿದೆ ಚಿಂತೆ
ಜೀವ ನಿನ್ನಾಸರೆಯ  
ಕಾಯುತಿಹುದು .....
            -- ಮೌನ ವೀಣೆ

Thursday, 29 November 2012

ಕರೆದುಬಿಡು ಗೆಳತೀ


 
ಅನುಭಾವ ಅನುಭೂತಿ 
ಅಗಮ್ಯ ಪ್ರೀತಿಯಲಿ 
ಅನುಸರಿಸಿ ಸಂಗಾತಿ 
ನಡೆಯಲೂ ಜೊತೆಯಲ್ಲಿ 
ನಡುನಡುವೆ ನಗುತ 
ನೀನಾಡೋ ಮಾತಿನಲಿ 
ನಾ ಸ್ತಬ್ಧ ಗೆಳತೀ.!!
ನಿನ್ನ ಕುಡಿ ನೋಟದಲಿ ..

ಒಡನಾಟ ಭಾಂದವ್ಯ 
ಮಮಕಾರ ಎದೆತುಂಬಿ 
ನವಿರಾದ ಅನುರಾಗ 
ಅಭಿಮಾನ ಮನದುಂಬಿ 
ನನ್ನ ಕಳಕೊಂಡೆ ಗೆಳತೀ..!!
ನಿನ್ನ ಸಾಂಗತ್ಯದಲಿ 

ಹೆಸರಿಡು  ನನಗೊಂದು 
ನಿನ್ನೆದೆಯ ಗೂಡಿನಲ್ಲಿ 
ಕರೆದುಬಿಡು ನನ್ನನ್ನು 
ಕಣ್ರೆಪ್ಪೆ ಸದ್ದಿನಲ್ಲಿ 
ಮರೆತುಬಿಡುವೆನು ಗೆಳತೀ...
 ಈ ಜಗವ ಆ ಕ್ಷಣದಿ...

---- ಮೌನವೀಣೆ 

ಚಿತ್ರಕೃಪೆ : ಅಂತರ್ಜಾಲ

Tuesday, 9 October 2012

ಅರಿಯದ ಭಾವಗಳು!!

 

ಎತ್ತ ಹೋಗಿದೆ ಏನು ಆಗಿದೆ 
ಒಂದೂ  ತಿಳಿಯದ ಜೀವನ 
ದಿಕ್ಕು ಕಾಣದೆ ಕಣ್ಮುಚ್ಚಿ ಸಾಗಿದೆ 
ನೀನು ಇಲ್ಲದ ಕಾರಣ.

ತಿಳಿಯದಾಗಿದೆ 
ನೆಪಗಳು ಕಾಡಿವೆ 
ಒಂಟಿ ಬದುಕಲಿ ಮೌನವು
ಹೇಳುವಾಸೆಯು ಹೆಸರೇ ತಿಳಿಯದು 
ಬಗೆಯೇ ಅರಿಯದ ಭಾವವು??!

ಮೂಕ ವಿಸ್ಮಿತ ಒಮ್ಮೆ ಭಾವುಕ
ಏನು ವಿಸ್ಮಯ ಜಗವಿದು 
ಎಲ್ಲ ಮರೆತಿದೆ ಬದುಕೇ ಕಲಿಸಿದೆ
ಏನೂ ಅರಿಯದೆ ನಗುವುದು.